ಶ್ರೀಮಂಜುನಾಥನ ದರ್ಶನದಿಂದ ಈ ಐದು ರಾಶಿಗಳಿಗೆ ಈ ತಿಂಗಳಿಂದ ಜೀವನದಲ್ಲಿ ಭಾರಿ ಬದಲಾವಣೆ ಕಾಣಬಹುದಾಗಿದೆ. ಈ ರಾಶಿಯವರಿಗೆ ಇಷ್ಟುದಿನ ಇದ್ದ ಸಂಕಷ್ಠಕಾಲ ದೂರವಾಗಿ ಒಳ್ಳೆಯದಿನಗಳು ಸಮೀಪಿಸುತ್ತವೆ. ಅಂದಹಾಗೆ ಜನರು ಹೆಚ್ಚು ನಂಬುವ ಮತ್ತು ಪೂಜೆ ಮಾಡುವ ದೇವರುಗಳಲ್ಲಿ ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯು ಅಗ್ರಗಣ್ಯ ಸ್ಥಾನದಲ್ಲಿದೆ. ಶ್ರೀ ಮಂಜುನಾಥ ಸ್ವಾಮಿಯ ಬಳಿ ಹೋಗುವ ಭಕ್ತರಿಗೆಲ್ಲಾ ಒಳ್ಳೆಯದನ್ನು ಮಾಡಿ ಸಲಹುತ್ತಿರುವ ಸ್ವಾಮಿಯು ಈ ಭಾರಿ ನೇರವಾಗಿ ಮೇಷ, ಕಟಕ, ವೃಷಭ, ಮಿಥುನ ಮತ್ತು ಸಿಂಹ ರಾಶಿಗಳ ಮೇಲೆ ನೇರ ದೃಷ್ಠಿ ಪ್ರಭಾವ ಬೀರಲಿದೆ. ಮೊದಲನೆಯದಾಗಿ ಮೇಷರಾಶಿಯವರಿಗೆ ಈ ಭಾರಿ ಅವರು ಮಾಡುತ್ತಿರುವ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿ ಲಾಭದಾಯಕವಾಗುತ್ತದೆ. ಜೊತೆಗೆ ಇಷ್ಟುದಿನ ನಿಧಾನಗತಿಯಲ್ಲಿ ಸಾಗುತ್ತಿದ್ದ ವಹಿವಾಟು ಚಟುವಟಿಕೆಗಳು ವೇಗವನ್ನು ಪಡೆಯುತ್ತವೆ.

ಅದರ ಜೊತೆಗೆ ಆರೋಗ್ಯ ವಿಚಾರದಲ್ಲಿ ಕೊಂಚ ಗಮನವಹಿಸಿದರೆ ಯಾವುದೇ ತೊಂದರೆ ಇರುವುದಿಲ್ಲ. ಇನ್ನು ವೃಷಭರಾಶಿಯವರಿಗೆ ಆರ್ಥಿಕತೆಯಲ್ಲಿ ಯಶಸ್ಸು ಲಭಿಸುತ್ತದೆ. ಆದರೆ ದೂರದ ಕ್ಷೇತ್ರಗಳಿಗೆ ಪ್ರಯಾಣ ಮಾಡುವುದನ್ನು ಮುಂದೂಡಿದರೆ ಉತ್ತಮ ಹಾಗೂ ಇವರ ರಾಶಿಯಲ್ಲಿ ಕೇತುಗ್ರಹ ನಾಲ್ಕನೆಯ ಮನೆಗೆ ಕಾಲಿಟ್ಟಿದ್ದು ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಮತ್ತೊಂದು ಶುಭವಿಚಾರ ಅಂದರೆ ಈ ರಾಶಿಯವರಿಗೆ ಹೂಡಿಕೆ ಮಾಡಲು ಸಕಾಲವಾಗಿದೆ. ಮಿಥುನ ರಾಶಿಯವರ ಮೇಲೂ ಕೂಡ ಈ ಭಾರಿ ಶ್ರೀ ಮಂಜುನಾಥ ಸ್ವಾಮಿಯ ಪ್ರಭಾವ ನೇರವಾಗಿ ಬೀಳಲಿದ್ದು ಇವರಿಗೆ ತಮ್ಮ ಮಾತಿನ ಮೇಲೆ ತುಂಬಾ ಎಚ್ಚರವಿರಬೇಕು. ನೀವು ಆಡಿದ ಮಾತಿಗೆ ಜನರು ಬಣ್ಣಕಟ್ಟಿ ಮಾತನಾಡಬಹುದು ಅದರಿಂದ ಸಮಸ್ಯೆಗೆ ಮುಜುಗರಕ್ಕೆ ಒಳಗಾಗಬಹುದು ಎನ್ನಲಾಗಿದೆ.

ಆದರೆ ನಿಮ್ಮ ಆಸೆ, ಆಕಾಂಕ್ಷೆ, ಕನಸುಗಳನ್ನು ನನಸಾಗಿಸುಲು ಇದು ಸುದಿನಗಳಾಗಿವೆ ಎಂದು ಶುಭಫಲಗಳನ್ನು ಕೂಡ ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸಿದ್ದಾರೆ. ಇನ್ನು ನಾಲ್ಕು ಮತ್ತು ಐದನೆಯ ರಾಶಿಯಾದ ಕಟಕ, ಸಿಂಹರಾಶಿಯವರಿಗೆ ಉತ್ತಮವಾದ ದಿನಗಳು ಆರಂಭವಾಗಿ ಜೀವನದಲ್ಲಿ ಪ್ರಗತಿ ಸಾಧ್ಯವಾಗುತ್ತದೆ. ಕಟಕ ರಾಶಿಯವರಿಗೆ ಮಿಶ್ರಫಲ ದೊರಕಿದರೂ ಸಹ ಉದ್ಯೋಗದಲ್ಲಿ ಬದಲಾವಣೆಯಾಗಿ ಉನ್ನತ ಮಟ್ಟಕ್ಕೆ ತಲುಪುವ ಅವಕಾಶ ಇದೆ. ಆದರೆ ಅನಾವಶ್ಯಕವಾಗಿ ಮಾಡುವ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕಿದೆ. ಇನ್ನು ಸಿಂಹರಾಶಿ ಅವರಿಗೆ ಜವಾಬ್ದಾರಿಗಳು ಹೆಚ್ಚಾಗಿ ಕೊಂಚ ಶ್ರಮವಾದರೂ ಸಹ ಎಲ್ಲವೂ ಶ್ರೀ ಮಂಜುನಾಥ ಸ್ವಾಮಿಯ ದಯೆಯಿಂದ ಸರಿದೂಗಿಸಿಕೊಂಡು ಕುಟುಂಬವನ್ನು ಸುಖಸಂತೋಷದಿಂದ ನಡೆಸಬಹುದಾಗಿದೆ.