ಈ ರಾಶಿಯವರು ಬಲು ಹಠವಾದಿಗಳು ಹಿಡಿದ ಕೆಲಸಗಳನ್ನು ಮಾಡಿಯೇ ತೀರುತ್ತಾರೆ

ಸಿಂಹ ರಾಶಿ ಮತ್ತು ಕುಂಭ ರಾಶಿ ವ್ಯಕ್ತಿಗಳು ಮದುವೆಯಾದರೆ ಅವರ ಜೀವನ ಸುಗಮವಾಗಿ ಚಂದದ ಆದರ್ಶ ಜೀವನ ಅವರದ್ದಾಗಿರುತ್ತದೆ. ಈ ಎರಡೂ ರಾಶಿಯ ವ್ಯಕ್ತಿಗಳು ಪರಸ್ಪರ ಸ್ವತಂತ್ರ ಪ್ರಿಯರು ಯಾರ ಅಧೀನದಲ್ಲೂ ಬದುಕಲು ಇಷ್ಟ ಪಡುವುದಿಲ್ಲ ಆದರೆ ಒಬ್ಬರಿಗೊಬ್ಬರು ಗೌರವ ಪ್ರೀತಿ ನೀಡುತ್ತಾ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಹುತ್ತಾರೆ. ಹಾಗಾದರೆ ಈ ಸಿಂಹ ರಾಶಿ ಮತ್ತು ಕುಂಬರಾಶಿಗಳ ಗುಣಲಕ್ಷಣಗಳನ್ನು ಪ್ರತ್ಯೇಕವಾಗಿ ತಿಳಿಯುವುದಾದರೆ ಈ ಸಿಂಹ ಅವರು ಆಕರ್ಷಕ ವ್ಯಕ್ತಿತ್ವವನ್ನು ಉಳ್ಳವಾಗಿರುತ್ತಾರೆ ಮತ್ತು ಭಾವ ಜೀವಿಗಳು ಯಾವುದಾದರೊಂದು ವಿಚಾರ ಇವರನ್ನು ಕಾಡಿದರೆ ಆ ವಿಷಯದಿಂದ ಹೊರ ಬರುವುದಕ್ಕೆ ತುಂಬಾ ಸಮಯ ಬೇಕಾಗುತ್ತದೆ ಇದು ಇವರ ನ್ಯುನತೆ ಕೂಡ ಹೌದು.

ಕೊಟ್ಟ ಮಾತಿಗೆ ಸದಾ ಬದ್ದರಾಗಿರುತ್ತಾರೆ. ಒಮ್ಮೆ ಕೊಟ್ಟ ಮಾತನ್ನು ಹಿಂದಿರುಗಿ ವಾಪಸ್ ತೆಗೆದುಕೊಳ್ಳುವುದಿಲ್ಲ ಅಷ್ಟರ ಮಟ್ಟಿಗೆ ಇವರ ಮಾತಿನಲ್ಲಿ ಗಂಭೀರ ಮತ್ತು ಮಹತ್ವ ವಿರುತ್ತದೆ, ಸಿಂಹರಾಶಿಯ ವ್ಯಕ್ತಿಗಳು ಹಠಮಾರಿತನದ ವ್ಯಕ್ತಿತ್ವವುಳ್ಳವರು ಆದರೂ ಸಹ ಶ್ರಮ ಪಡುವಂತಹ ವ್ಯಕ್ತಿಗಳು. ಇವರು ಪ್ರೀತಿ, ಪ್ರೇಮ, ಪ್ರಣಯ ಇಂತಹ ವಿಚಾರಗಳಲ್ಲಿ ಇವರ ನಿಲುವು ಬಹಳ ಸ್ಪಷ್ಟವಾಗಿರುತ್ತದೆ, ಕೆಲವೊಮ್ಮೆ ಮೌನವಹಿಸಿದರೆ ಮತ್ತೊಮ್ಮೆ ಹೆಚ್ಚು ಚಟುವಟಿಕೆಯಿಂದ ವರ್ತಿಸುತ್ತಾರೆ.

ಭಾವನಾತ್ಮಕ ವಿಷಯಗಳಲ್ಲಿ ಇವರು ಬೇಗ ಕರಗುತ್ತಾರೆ. ಇನ್ನು ಕುಂಭರಾಶಿಯ ವ್ಯಕ್ತಿತ್ವ ಗುಣಲಕ್ಷಣಗಳನ್ನು ಗಮನಿಸುವುದಾದರೆ ಇವರು ರಾಶಿ ಮಂಡಲದ 11 ನೇಯ ರಾಶಿಯವರಾಗಿದ್ದು ಇವರು ಗಂಭೀರ ಸ್ವಭಾವದವರಾಗಿತ್ತಾರೆ. ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟವಾದ ದಾರಿಯನ್ನು ಕಂಡುಕೊಂಡು ತಮ್ಮ ಗುರಿಯನ್ನು ಪಟ್ಟು ಬಿಡದೇ ಸಾಧಿಸಿ ಯಶಸ್ವಿ ಜೀವನ ಸಾಗಿಸುತ್ತಾರೆ. ಒಟ್ಟಾರೆಯಾಗಿ ಈ ಎರಡೂ ರಾಶಿಯವರು ಹೃದಯ ವೈಶಾಲ್ಯತೆ ಉಳ್ಳವರಾಗಿದ್ದು ಒಂದೇ ಗುಣ ಸ್ವಭಾವ ಹೊಂದಿರುತ್ತಾರೆ.

ಈ ರಾಶಿಯವರು ಪರಸ್ಪರ ವಿವಾಹ ಬಂಧನದಲ್ಲಿ ಬಂಧಿಯಾದರೆ ಒಬ್ಬೊರಿಗೊಬ್ಬರು ಇದೇ ನಮ್ಮ ಜಗತ್ತು ಎಂದು ಜೀವನ ನಡೆಸುತ್ತಾರೆ. ಈ ಕುಂಭ ರಾಶಿಯವರಿಗೆ ಯಾವ ವ್ಯಕ್ತಿ ಎಲ್ಲಾ ಸಾಂಸಾರಿಕ ಜವಾಬ್ದಾರಿಯನ್ನು ಹೊತ್ತು ತನ್ನನ್ನು ಪ್ರೀತಿಯಿಂದ ಆರೈಕೆ ಮಾಡುವಂತಹ ವ್ಯಕ್ತಿಯನ್ನು ಗೌರವದಿಂದ ಕಾಣುತ್ತಾರೆ. ಸಿಂಹ ಮತ್ತು ಕುಂಭ ರಾಶಿಯವರಿಗೆ ಮಾತಿನಲ್ಲಿ ಮೋಡಿ ಮಾಡುವಂತಹ ಚಾಕಚಕ್ಯತೆ ಇವರಿಬ್ಬರಲ್ಲೂ ಇರುತ್ತದೆ, ಇಬ್ಬರೂ ಸಹ ಉಚ್ಚ ಬೌದ್ದಿಕ ಸ್ಥಿರದವರಾಗಿರುತ್ತಾರೆ. ನಿರ್ಧಾರಗಳಲ್ಲಿ ಅಥವಾ ಇತರೆ ವಿಷಯಗಳಲ್ಲಿ ಸ್ವತಂತ್ರವಾಗಿರಬೇಕು ಎಂದು ಮತ್ತು ಯಾವುದೇ ವಿಚಾರದಲ್ಲಿ ಒಬ್ಬರಿಗೊಬ್ಬರು ಹಸ್ತಕ್ಷೇಪ ಮತ್ತು ಅಧಿಕಾರ ಚಲಾಯಿಸುವುದನ್ನು ಮಾಡಬಾರದು ಎಂಬ ಸಿದ್ದಾಂತ ಇವರಿಬ್ಬರಿಗೂ ಇರುತ್ತದೆ.

ಇದೇ ಇಬ್ಬರಿಗೂ ಮನಸ್ತಾಪಕ್ಕೆ ಕಾರಣವಾಗಿ ಸಮಸ್ಯೆ ಮಾಡಿಕೊಂಡು ಮುನಿಸು ಕೋಪ, ತಾಪ ಉಂಟಾಗುವುದಕ್ಕೆ ಕಾರಣವಾಗುತ್ತದೆ. ಆದರೂ ಸಹ ಅವೆಲ್ಲವನ್ನು ಬದಿಗೊತ್ತಿ ಇಬ್ಬರಿಗೂ ಸಂಬಂಧವನ್ನು ಹೇಗೆ ಉಳಿಸಿಕೊಳ್ಳಬೇಕು, ನಿಭಾಯಿಸಬೇಕು ಎಂದು ತಿಳಿದಿರುವುದಿರಿಂದ ತಾವೇ ಸಮಸ್ಯೆ ಬಗೆಹರಿಸಿಕೊಂಡು ಸುಂದರವಾದ ಜೀವನ ಕಟ್ಟಿಕೊಂಡು ಆದರ್ಶವಾಗಿ ಬದುಕುತ್ತಾರೆ, ಪರಸ್ಪರ ನಂಬಿಕೆಯಿದ್ದರೆ ಜೀವನ ಸುಗುಮ ಸುಲಲಿತ ಸುಂದರವಾಗಿರುತ್ತದೆ. ಈ ರಾಶಿಯವರು ತಪ್ಪದೇ ಪಾಲಿಸಬೇಕಾದ ನಿಯಮವೆಂದರೆ ಪ್ರತಿನಿತ್ಯ ಬೆಳಿಗ್ಗೆ ಸೂರ್ಯದೇವನ ಆರಾಧನೆ ಮಾಡಬೇಕು ಇದರಿಂದ ಇವರ ಜೀವನದಲ್ಲಿ ಸಾಕಷ್ಟು ಪ್ರಗತಿ ಕಂಡು ಉಜ್ವಲವಾದ ಭವಿಷ್ಯ ಇವರದ್ದಾಗುತ್ತದೆ.

%d bloggers like this: