ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಾವು ಕೆಲವೊಂದು ತಪ್ಪುಗಳು ಗೊತ್ತಿದ್ದು ಅಥವಾ ಗೊತ್ತಿರೋದು ಮಾಡಿರುತ್ತೇವೆ ಆದರೆ ಕೆಲವೊಮ್ಮೆ ಅವು ದರಿದ್ರತನ ಸೂಚಕವಾಗಿರುತ್ತವೆ. ಹೌದು ಅನೇಕ ಜನರಿಗೆ ಏನಾದರೂ ವಸ್ತುಗಳನ್ನು ಇನ್ನೊಬ್ಬರಿಗೆ ನೀಡುವಂತಹ ಅಭ್ಯಾಸವಿರುತ್ತದೆ. ಅದು ಒಳ್ಳೆಯದೇ ನಿಜ ಆದರೆ ಎಲ್ಲಾ ವಸ್ತುಗಳನ್ನು ನೀಡಲು ಹೋಗಬಾರದು. ಈ ರೀತಿಯ ತಪ್ಪುಗಳಿಂದ ನೀಡಿದವರಿಗೆ ದಾರಿದ್ರ್ಯ ಬರುತ್ತದೆಯೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಯಾವುದೇ ಶುಭಸಮಾರಂಭಗಳ ಸಂದರ್ಭದಲ್ಲಿ ಮಹಿಳೆಯರು ಒಬ್ಬರ ಮನೆಯಿಂದ ಚಿನ್ನ ತೆಗೆದುಕೊಂಡು ಬಂದು ಅಲಂಕಾರ ಮಾಡಿಕೊಳ್ಳುತ್ತಾರೆ. ಅಥವಾ ಸಂಬಂಧಿಕರು ಯಾವುದೊಂದು ಸಮಾರಂಭಕ್ಕೆ ಹೋಗುವ ಸಂದರ್ಭದಲ್ಲಿ ಅವರನ್ನು ಕೇಳಿದಾಗ ನಿರಾಕರಿಸಲಾಗದೆ ಕೊಡುತ್ತೇವೆ ಆದರೆ ಹೀಗೆ ಮಾಡುವುದರಿಂದ ಕೊಟ್ಟವರಿಗೆ ಕೆಲವರಿಗೆ ತೊಂದರೆಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಂಗಾರವನ್ನು ನಮ್ಮ ಸಂಪ್ರದಾಯದಲ್ಲಿ ಲಕ್ಷ್ಮಿ ಎಂದು ಪೂಜಿಸುತ್ತಾರೆ ಹಾಗಾಗಿ ಇದನ್ನು ಯಾರಿಗಾದರೂ ನೀಡಿದರೆ ನಿಮ್ಮ ಮನೆಯಲ್ಲಿ ನೆಲೆಸಿರುವಂತಹ ಲಕ್ಷ್ಮಿ ಅವರ ಮನೆಗೆ ಹೋಗುತ್ತಾಳೆ ಎಂಬುದಾಗಿ ಜ್ಯೋತಿಷ್ಯ ಹೇಳುತ್ತದೆ.