ಮಕರ ಸಂಕ್ರಮಣ ದಿನದ ನಂತರ ರಾಶಿಚಕ್ರದಲ್ಲಿ ಮಹತ್ತರವಾದ ಬದಲಾವಣೆಗಯಗಹು ಗತಿಸಿದ್ದು ಈ ಆರು ರಾಶಿಗಳ ಮೇಲೆ ಗ್ರಹಗತಿಗಳು ನೇರವಾಗಿ ಪ್ರಭಾವ ಬೀರುತ್ತಿದೆ. ಈ ಗ್ರಹಗತಿಗಳ ದೃಷ್ಟಿಯಿಂದ ಈ ರಾಶಿಯ ವ್ಯಕ್ತಿಗಳಿಗೆ ಶುಭ ಮತ್ತು ಅಶುಭ ಫಲಗಳು ಲಭಿಸಲಿವೆ. ಜೊತೆಗೆ ಈ ರಾಶಿಯವರಿಗೆ ರಾಜಯೋಗ, ಕುಭೇರ ಯೋಗ ಕೂಡಿ ಬರಲಿದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಿದ್ದಾರೆ. ಮೇಷರಾಶಿಯವರಿಗೆ ಈ ಸಂಕ್ರಾಂತಿ ಹಬ್ಬದ ನಂತರ ವೈಯಕ್ತಿಕ ಜೀವನದಲ್ಲಿ ಅನನ್ಯವಾದ ಅನುಭವ ಆಗುತ್ತದೆ. ಮನಸ್ಸಿನ ದುಗುಡ, ದುಮ್ಮಾನಗಳು ದೂರವಾಗಿ, ಆಂತರ್ಯದಲ್ಲಿ ಸಂತೋಷ ಉಂಟಾಗುತ್ತದೆ. ಆರೋಗ್ಯದಲ್ಲಿ, ಐಶ್ವರ್ಯ ನಿರೀಕ್ಷೆಗೂ ಮೀರಿ ಉತ್ತಮವಾಗಿರುತ್ತದೆ. ಇನ್ನು ವ್ಯಾಪಾರ, ವ್ಯವಹಾರಗಳಲ್ಲಿ ಪ್ರಗತಿ ಕಾಣುತ್ತದೆ. ಮಕ್ಕಳ ವಿಧ್ಯಾಭ್ಯಾಸದಲ್ಲಿ ಪ್ರಗತಿ ಕಾಣುತ್ತಾರೆ.
ಕನ್ಯಾ: ಕನ್ಯಾ ರಾಶಿಯವರಿಗೆ ಈ ಸಂಕ್ರಮಣ ದಿನದಿಂದ ರಾಜಯೋಗ, ಕುಭೇರರಾಗುವ ಯೋಗ ಲಭಿಸಲಿದೆ. ಇವರ ಜೀವನದಲ್ಲಿ ಈ ವರ್ಷ ಹಂತ ಹಂತವಾಗಿ ಪ್ರಗತಿ ಕಾಣುತ್ತಾರೆ. ಉನ್ನತ ಮಟ್ಟದ ಅಧಿಕಾರ ಸ್ಥಾನಮಾನ ದೊರಕುತ್ತದೆ. ನಿಮ್ಮ ಉದ್ಯೋಗದಲ್ಲಿ ನಿಮಗೆ ಹೊಸ ಜವಬ್ಧಾರಿ ನಿರ್ವಹಿಸಬೇಕಾಗುತ್ತದೆ. ನಿಮ್ಮ ಮೇಲಾಧಿಕಾರಿಗಳಿಂದ ಪ್ರಶಂಸಿಸುತ್ತಾರೆ. ಆರ್ಥಿಕ ಜೀವನ ಉತ್ತಮವಾಗಿರುತ್ತದೆ.

ಧನಸ್ಸು: ಧನಸ್ಸು ರಾಶಿಯವರಿಗೆ ಈ ವರ್ಷದಿಂದ ವೃತ್ತಿಪರ ಜೀವನದಲ್ಲಿ ಅಮೋಘವಾದ ಯಶಸ್ಸು ದೊರೆಯುತ್ತದೆ. ಇನ್ನು ವ್ಯಾಪಾರ ವ್ಯವಹಾರಗಳಲ್ಲಿ ಅತ್ಯಧಿಕ ಲಾಭವಾಗುತ್ತದೆ. ಆದರೆ ಬೃಹತ್ ಮೊತ್ತದ ಹೂಡಿಕೆಯನ್ನು ಮಾಡಲು ನಿರ್ಧಾರ ತೆಗೆದುಕೊಳ್ಳಬೇಡಿ, ಇದರಿಂದ ನಿಮಗೆ ಅಪಾಯ ಹೆಚ್ಚಾಗಿರುತ್ತದೆ, ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಉದ್ಯೋಗ ಪಡೆದು ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಬಹುದಾಗಿದೆ. ಮಕ್ಕಳಿಗೆ ಪೋಷಕರಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಜೊತೆಗೆ ಮಕ್ಕಳಿಂದಲೂ ಸಹ ವೃದ್ಧರಿಗೆ ಉತ್ತಮವಾದ ಸಹಕಾರ ದೊರೆಯುತ್ತದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಮಾಡುವ ಅವಕಾಶವಿರುತ್ತದೆ.
ಸಿಂಹ ಮತ್ತು ಕುಂಭ ರಾಶಿಯವರಿಗೆ ಒಂದೇ ರೀತಿಯಾದ ಶುಭ ಅಶುಭ ಫಲಗಳು ದೊರೆಯಲಿದ್ದು, ಉದ್ಯೋಗದಲ್ಲಿ ಹಿರಿಯ ಸಹೋದ್ಯೋಗಿಗಳಿಂದ ಸಹಕಾರ ದೊರೆತು ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತದೆ. ಇನ್ನು ಆರ್ಥಿಕ ಜೀವನ ಚೇತರಿಕೆ ಕಂಡು ಲಕ್ಷ್ಮಿ ಕೃಪಾಕಟಾಕ್ಷ ವಾಗಿ ಧನ ಪ್ರಾಪ್ತಿಯಾಗುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಿ ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತೇನೆ. ಜೊತೆಗೆ ನಿಮ್ಮ ದಾಂಪತ್ಯ ಜೀವನವು ಸಹ ಸುಖ ಸಂತೋಷದಿಂದ ಕೂಡಿರುತ್ತದೆ.

ಮಕರ: ಈ ರಾಶಿಯವರಿಗೆ ಈ ಮಕರ ಸಂಕ್ರಮಣ ಕಾಲದಿಂದ ಜೀವನದಲ್ಲಿ ಅಮೋಘವಾದ ದಿನಗಳು ಪ್ರಾರಂಭವಾಗುತ್ತದೆ. ಆರಂಭಿಸಿದ ನೂತನ ಎಲ್ಲಾ ಕೆಲಸ ಕಾರ್ಯಗಳು ಜಯವಾಗುತ್ತದೆ. ಇನ್ನು ಕೌಟುಂಬಿಕ ಕಲಹಗಳು ದೂರವಾಗಿ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ವ್ಯಾಪಾರ ವ್ಯವಹಾರಗಳು ಕೂಡ ಲಾಭದಾಯಕವಾಗಿ ನಡೆಯುತ್ತವೆ. ಆದರೆ ಇತರರನ್ನು ಬಹುಬೇಗ ನಂಬಲು ಹೋಗಬೇಡಿ, ಇದರಿಂದ ಅನಾವಶ್ಯಕ ಸಮಸ್ಯೆಗಳಿಗೆ ಸಿಲುಕಬಹುದು. ಇನ್ನು ಬಿಡುವಿನ ವೇಳೆಯಲ್ಲಿ ಪುಣ್ಯಕ್ಷೇತ್ರಗಳ ಭೇಟಿ ಮಾಡುವುದರಿಂದ ಭಗವಂತನ ಅನುಗ್ರಹ ನಿಮ್ಮದಾಗಿರುತ್ತದೆ ಮತ್ತು ಮಕರ ರಾಶಿಯವರಿಗೆ ಈ ವರ್ಷ ಸಂಪೂರ್ಣ ಅದೃಷ್ಟವಿದ್ದು, ರಾಜಯೋಗ ಪಡೆಯುವಂತಹ ಅವಕಾಶವಿದೆ.