ಕೆಲವೊಮ್ಮೆ ಜನರ ದೃಷ್ಠಿ ಎಂಬುದು ಎಂತಹವರನ್ನು ಮಂಕಾಗಿಸಿ ಬಿಡುತ್ತದೆ, ಎಲ್ಲವೂ ಚೆನ್ನಾಗಿದ್ದು ಜೀವನ ಪ್ರಗತಿಯತ್ತ ಸಾಗುತ್ತಿರುತ್ತದೆ ನಿಮ್ಮ ಅನಿರೀಕ್ಷಿತವಾಗಿ ಭೇಟಿ ನೀಡುವ ಜನರು ಅಂದರೆ ಸ್ನೇಹಿತರಾಗಿರಬಹುದು ಅಥವಾ ಬಂಧುಗಳು ಆಗಿರಬಹುದು ಇವರುಗಳು ನಿಮ್ಮ ಯಶಸ್ಸು ಕೀರ್ತಿಯನ್ನು ನೋಡಿ ಅವರ ಕಣ್ಣು ಕೆಂಪಾಗಬಹುದು. ಇದು ಇಷ್ಟಕ್ಕೆ ಸೀಮಿತವಾಗುವುದಿಲ್ಲ ಮುಂದೊಂದು ದಿನ ನಕರಾತ್ಮಕ ಪರಿಣಾಮ ಬೀರುತ್ತದೆ ವ್ಯಾಪರದಲ್ಲಿ ನಷ್ಟ, ಉದ್ಯೋಗದಲ್ಲಿ ತೊಂದರೆ, ಅನಾರೋಗ್ಯ, ಇತರೆ ಮಾನಸಿಕ ತೊಂದರೆಗಳು ಉಂಟಾಗಿ ಇಡೀ ಬದುಕು ಗೊಂದಲಮಯವಾಗಿ ಅವಸ್ಥೆ ಪಡುವಂತಹ ಸಂಧರ್ಭ ಏರ್ಪಡುತ್ತದೆ. ಇದಕ್ಕೆ ನೀವು ಪರಿಹಾರವಾಗಿ ಸಾಕ್ಷಾತ್ ಲಕ್ಷ್ಮಿ ಸ್ವರೂಪವಾದ ಉಪ್ಪುನ್ನು ತಂತ್ರವಾಗಿ ಬಳಸಬಹುದಾಗಿದೆ.

ಅದರಲ್ಲೂ ಈ ಹರಳು ಉಪ್ಪು ಬಳಕೆ ಯೋಗ್ಯ ಈ ಉಪ್ಪನ್ನು ಮನೆಯ ಎಲ್ಲಾ ದಿಕ್ಕುಗಳಲ್ಲಿ ಎಲೆಯ ಮೇಲಿರಿಸಿ ಇಟ್ಟು ಪ್ರತಿದಿನ ಅದಕ್ಕೆ ಪೂಜಿಸಿ ವಂದಿಸಬೇಕು. ಇದನ್ನು ನೀವು ಪರಿಣಾಮಕಾರಿಯಾಗಿ ಪ್ರಭಾವ ಆಗ ಬೇಕಾದರೆ ಪ್ರತಿ ಮಂಗಳವಾರ ರಾತ್ರಿ ಹಾಗೂ ಶುಕ್ರವಾರದ ರಾತ್ರಿ ಇಟ್ಟು ಪೂಜಿಸಬೇಕು ಮರುದಿನ ಇದನ್ನು ಯಾರಿಗೂ ಕಾಣದಂತೆ ಬಿಸಾಡಬೇಕು ಈ ರೀತಿಯಾಗಿ ವಾರದಲ್ಲಿ ಎರಡು ಮೂರು ಬಾರಿ ಈ ರೀತಿಯ ಉಪ್ಪಿನ ತಂತ್ರ ಅನುಸರಿಸಿದರೆ ಶತ್ರುಗಳು ನಿಮಗೆ ಮಾಡಿಸಿರುವ ಮಾಟ ಮಂತ್ರ, ಭಾನಾಮತಿ ಅಂತಹ ದುಷ್ಟಕೃತ್ಯಗಳಿಂದ ದೂರಾಗಬಹುದು ಹಾಗೂ ಜನರ ದೃಷ್ಠಿಯಿಂದ ಪಾರಾಗಬಹುದು ಎಂದು ಪಂಡಿತರು ತಿಳಿಸುತ್ತಾರೆ.